ಕಾಲಾತೀತ ತಲಬು

ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ
ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ
ಬಾಯಿ ತೆರೆದುಕೊಂಡೆ.
ಈಗ ಮೆಲ್ಲಲೇಬೇಕು ಕವಳ.
ಚಟ ಎಷ್ಟೆಂದರೂ ಚಟವೇ:
ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ
ಹಂಗೆಲ್ಲ ಸಿಕ್ಕುವ ಸರಕಲ್ಲ.
ಎದುರಿಗೆ ಅದೇ ಹಳೆಯ ಶತ್ರು
ಹಲ್ಲುಗಿಂಜುತ್ತ
ಧನದ ಥಾಲಿ ಹಿಡಿದ ಕೋರೆದಂತಗಳ ಧನಿಕ.

ಹಂಬಲಿಸಿ ಲೇಪಿಸಿದ ಲಿಪಸ್ಟಿಕ್ಕು,
ಕ್ರೀಮು, ಮುಖಬಣ್ಣಗಳು
ಸೋತು ಸುಣ್ಣವಾಗಿವೆ.
ಒತ್ತಿ ಕುಳಿತುಕೊಳ್ಳಲಾಗದೇ ಶತ್ರುವಿನಂತೆ.
ಕಾಲನ ಕೈಯಲ್ಲಿ ಸಿಕ್ಕು ತರಗೆಲೆಗಳಂತೆ
ಮುದುಡಿ,
ತುಪ್ಪೆಯಾಗಿರುವ ಚರ್ಮದ
ಸುಕ್ಕು ನೋಡಿ ಮುಸಿ ಮುಸಿ ನಗುತ್ತ,
ಲೇವಡಿ ಮಾಡುತ್ತಿವೆ ಶತ್ರುವಿನಂತೆ

ಈಗಷ್ಟೇ ಬಿಚ್ಚಿಟ್ಟ ಬಳೆ ಮಂಗಮಾಯವಾದಂತೆ.
ಹುಡುಕಿ ಹುಡುಕಿ ಸಾಕಾಗಿ
ಪ್ರಾಯ ದಕ್ಕಿಸಿಕೊಟ್ಟ ಶತ್ರುವಿಗೆ ಹಿಡಿಶಾಪ ಹಾಕುತ್ತ
ಕೈ ನೋಡಿಕೊಂಡೆ.
ಅರೇ ಯಾವಾಗ ಕೈ ಸೇರಿತು,
ಮಂದಿ ಮಗಂದು?
ಜಿಗುಪ್ಸೆಯಾದರೂ ಚಿನ್ನಚಿನ್ನವೇ?
ಶತ್ರುವಾದರೇನು?

ಮೇಲಿನ ಕೇರಿ ಮಾಯಣ್ಣನ ಮಗಳು
ಮೈನೆರೆದಾಳಂತೆ. ದೇವರಿಗೆ ಬಿಡ್ತಾರಂತೆ.
ಅದಕ್ಕೆ ಬಳೆ ನೆನಪಾಯ್ತು.
“ಹೀರೇಕಿ ನೀನು, ನಿತ್ಯ ಸುಮಂಗಲಿ.
ಹರಸಿ ಹೋಗು ಬಾ.” ಎಂದಿದ್ದ.
ಯಾವ ಕಾಲದಲ್ಲಿದ್ದಾನೆ ಮಾಯಣ್ಣ.
ಕಾಲ ಯಾವುದಾದ್ರೇನೂ ಈಗೆಲ್ಲ
ಹೈಟೆಕ್ಕು ಕಾಲವಂತೆ.
ಹೊಸ ನಮೂನೆ ದಂಧೆಗಳು.

ಗೊನೆ ಕಡಿದ ಬಾಳೆಹಂಗೆ ಬದುಕು.
ಹರಕು ಚಾಪೆ ಹಂಗೆ ದೇಹ
ಆಗುತ್ತೆ ಅಂತ ಗೊತ್ತಿಲ್ಲೇನು?
ಕಟಕಟ ಹಲ್ಲುಕಡಿಯೋದ ಬಿಟ್ಟು
ಬೇರೇನೂ ಮಾಡೋಕಾಗಲ್ಲ.
ಹರಕು ಕಚ್ಚೆ ಧಣಿಗೂ
ಮೆಳ್ಳೆಗಣ್ಣ ಪೂಜಾರಿಗೂ ಬೆಂಕಿ ಹಾಕ.
ಅರೇ ಶತ್ರು ಅಂದ್ರೆ ಯಾರು?
ಈ ಕವಳದ ತಲುಬಿಗಿಷ್ಟು
ಹೊಗೆ ಹಾಕ. ತೂ.. ತೂ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬
Next post ಮುಸ್ಸಂಜೆಯ ಮಿಂಚು – ೧೪

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys